Skip to main content

ಕಾಡಿನಲ್ಲಿಯ ದೀಪಾವಳಿ!

 ಅದು ಆಗಸ್ಟ್ ತಿಂಗಳಿನ ಸಮಯ. ಅಪ್ಪ ಮತ್ತು ನಾನು ರಾತ್ರಿ ಎಲ್ಲಿಗೋ ಹೋಗಿದ್ದವರು ಮನೆಗೆ ಹಿಂದಿರುಗುತ್ತಿದೆವು. ಕಾಡಿನ ಆ ರಸ್ತೆಯಲ್ಲಿ ಅಪ್ಪ  ಇದ್ದಕ್ಕಿದ್ದಂತೆ ಕಾರು ನಿಲ್ಲಿಸಿ ಎಲ್ಲ ಲೈಟ್ ಗಳನ್ನು ಆಫ್ ಮಾಡಿ, ಒಂದು ಮರದ ಬುಡ  ನೋಡುತ್ತಿರಲು ಹೇಳಿದರು. ನನಗೆ ಮೊದಲು ಆ ಮರವನ್ನು ನೋಡಿದಾಗ ಏನೂ ಗೊತ್ತಾಗಲಿಲ್ಲ. ಕೆಲವು ನಿಮಿಷಗಳ ನಂತರ ಅದು  ಹಸಿರು ಬಣ್ಣದಲ್ಲಿ ಹೊಳೆಯಲಾರಂಭಿಸಿತು.ಫೋಟೋ ತೆಗೆಯಲು ಹೋದರೆ ಫ್ಲಾಶ್ ಲೈಟ್  ನ ಬೆಳಕಿಗೆ ಏನೂ ಕಾಣಲೆ ಇಲ್ಲ. ನಂತರ ತಿಳಿದದ್ದೇನೆಂದರೆ ಅದು ಹೊಳೆಯುವ fungus. ಇದು ಮಳೆಗಾಲದಲ್ಲಿ ನಮ್ಮ ಕಾಡುಗಳಲ್ಲಿ ಬೆಳೆಯುತ್ತದೆ ಎಂದು. 

ಎಷ್ಟು ಆಶ್ಚರ್ಯವಲ್ಲವೇ? ನಾವೆಲ್ಲರೂ bioluminescence ಜೀವಿಗಳ ಬಗ್ಗೆ ಪುಸ್ತಕಗಳಲ್ಲಿಯೋ, ಅಥವಾ ಟಿವಿಯಲ್ಲೊ ನೋಡಿರುತ್ತೇವೆ. bioluminescence ಎಂದರೆ ಜೀವಿಗಳು ನೈಸರ್ಗಿಕವಾಗಿ  ತಮ್ಮಲ್ಲಿ ಬೆಳಕನ್ನು ಹೊಮ್ಮಿಸಿಕೊಳ್ಳುವುದು ಎನ್ನಬಹುದು. ಇವು ಸಾಮಾನ್ಯವಾಗಿ ರಾಸಾಯನಿಕ ಕ್ರೀಯೆಯ ಕಾರಣದಿಂದಲೇ ಆಗುತ್ತವೆ. ನಾವೆಲ್ಲರೂ ಮಿಂಚುಹುಳ (firefly )ಗಳನ್ನು ನೋಡಿರುತ್ತೇವೆ. ಕೆಲವು ಜೆಲ್ಲಿ ಫಿಶ್ಗಳು, ಸಮುದ್ರ ಜೀವಿಗಳು ಸಹ ಇದನ್ನು ಬಳಸುತ್ತವೆ. ಅವು ತಮ್ಮ  ಸಂಗಾತಿಯ ಹುಡುಕಾಟಕಾಗಿಯೇನೋ ಈ ಗುಣವನ್ನು ಬೆಳೆಸಿಕೊಂಡಿವೆ. ಆದರೆ ಈ fungi ಗಳು? ಇವಕ್ಕೆ ಅಂತಹ ಯಾವುದೇ ಕೆಲಸವಿಲ್ಲ. ವಿಕಾಸವಾದದ ಪ್ರಕಾರ  ಇವು ಈ ರೀತಿಯ ಗುಣವನ್ನು  ಬೆಳೆಸಿಕೊಳ್ಳಲು ಯಾವುದಾದರೊಂದು ಕಾರಣ ಇರಬೇಕಲ್ಲವೇ? 

via : newsindiaexpress

ಈ fungi ಮೊದಲಿನಿಂದಲೂ ಮನುಷ್ಯರ ಕುತೂಹಲ ಕೆರಳಿಸಿದ್ದೇ. ಆರಿಸ್ಟೋಟಲ್ ಕೂಡಾ ಇವನ್ನು ತಾನು ನೋಡಿದ್ದಾಗಿ ಉಲ್ಲೇಖಿಸಿದದಾನಂತೆ. ಹಾಗೆಯೇ, ಮತ್ತೊಬ್ಬ ಪ್ರಾಚೀನ  ಪ್ರಕೃತಿತಜ್ಞ Pliny the  elder  ಕೂಡಾ ಇದನ್ನು ಫ್ರಾನ್ಸ್ ನಲ್ಲಿ ನೋಡಿದ್ದಾಗಿ ಹೇಳಿದ್ದಾನೆ. ಈಗಿನ ವಿಜ್ಞಾನಿಗಳ ಪ್ರಕಾರರ ಸುಮ್ಮಾರು 71 ಜಾತಿಯ  bioluminescence  fungi ಈಗ ಇವೆ. ಅಂದಹಾಗೆ ನೀವು ಲೈಫ್ ಆಫ್ ಪೈ ಚಿತ್ರ ನೋಡಿದ್ದರೆ, ನಿಮಗೆ ನೆನಪಿರಬಹುದು, ಸಮುದ್ರದಲ್ಲಿ ಪೂರ್ತಿ ನೀಲಿ ಬಣ್ಣದ ಬೆಳಕು ಬರುತ್ತಿರುತ್ತದೆ. ಅವು bioluminescence plankton ಕಾರಣದಿಂದಲೇ(ಇದೆ ರೀತಿ ನೀವು ಮಲೆಯಾಳಂ ಚಿತ್ರ ಕುಂಬಳಂಗಿ ನೈಟ್ಸ್ ಎಂಬ ಚಿತ್ರದಲ್ಲಿಯೂ ಇದನ್ನು ಕಾಣಬಹುದು) ಅಷ್ಟೇಕೆ, ನಮ್ಮ ಕಾರವಾರದಲ್ಲಿಯೇ 2020 ರಲ್ಲಿ ಈ ಸಮುದ್ರದ plankton ಕಂಡುಬಂದಿತ್ತು. 

ಇವೆಲ್ಲವೂ ಯಾವ ಮ್ಯಾಜಿಕ್ಕೂ ಅಲ್ಲ. ಎಲ್ಲವೂ ರಾಸಾಯನಿಕ ಕ್ರೀಯೆಯ ಪರಿಣಾಮ. ಈ fungi ಗಳಲ್ಲಿ luciferase ಎಂಬ enzyme ಇರುತ್ತದೆ. ಇದು lucifern ಎಂಬ ಮತ್ತೊಂದು ಅಣುವಿನ ಜೊತೆ ಸೇರಿದಾಗ ಬೆಳಕು ಬರುತ್ತದೆ. ಈ ಬೆಳಕು ಅಷ್ಟೊಂದೇನೂ ಪ್ರಖರವಲ್ಲ. ಬರೀ 500-530 ನಾನೋ ಮೀಟರ್ ಅಷ್ಟೇ. ಆದರೆ ಇವು ನೋಡಲು ಮಾತ್ರ ಕಾಡಿನಲ್ಲಿ ದೀಪಾವಳಿಯಿದ್ದಂತೆ ಕಾಣುತ್ತದೆ. luciferase ಇರುವುದರಿಂದ ಇದಕ್ಕೆ ಹಸಿರು ಬಣ್ಣ. ಯಾವ ರಾಸಾಯನಿಕವಿದೆಯೋ ಅದರ ಆಧಾರದ ಮೇಲೆ ಬಣ್ಣ ಬದಲಾಗುತ್ತದೆ. 

ಆದರೆ ಇವು ಬೆಳಕು ಸೂಸಲು ಒಂದು ಕಾರಣ ಬೇಕಲ್ಲವೇ?ಇದಕ್ಕೆ ಉತ್ತರ ಹುಡುಕಲು 2015 ರಲ್ಲಿ ವಿಜ್ಞಾನಿಗಳು ಮೇಘಾಲಯದ ಕಾಡಿನಲ್ಲಿ   ಒಂದು ಪ್ರಯೋಗ ಮಾಡಿದರು. ಇದೆ ರೀತಿಯಲ್ಲಿಯೇ ಇರುವ ಅಣಬೆಗಳನ್ನು (ನಮ್ಮ ಕಡೆ ಇರುವದು ಪಾಚಿಯ ರೀತಿ ಇರುತ್ತದೆ) ನಕಲು ಮಾಡಿ ಪ್ಲಾಸ್ಟಿಕ್ ನ  ಅಣಬೆಗಳನ್ನು ಮಾಡಿದರು. ಒಂದು ಅಣಬೇಗೆ ಈ ಬೆಳಕನ್ನು ಎಲ್ಈಡಿ ಲೈಟ್ ಮೂಲಕ ಕೊಟ್ಟು ಅದರ ಬಳಿ ಅಂಟಿನ ಮುದ್ದೆಯನ್ನು ಹಚ್ಚಿದರು. ಒಂದು ರಾತ್ರಿ ಕಾಡಿನಲ್ಲಿ ಇದನ್ನು ಇತ್ತು ನೋಡಿದಾಗ, ಬೆಳಕು ಇದ್ದ ಅಣಬೆಗೆ ಹೆಚ್ಚು ಕೀಟಗಳು ಆಕರ್ಷಿತವಾಗಿದ್ದವು. ಬೆಳಕಿಲ್ಲದವು ಹಾಗೆಯೇ ಇದ್ದವು. ಇವು ಅಣಬೆಯ ಬೀಜ ಪ್ರಸಾರಕ್ಕೆ ಬರಬಹುದೇನೋ ಎಂದು ನಂಬಿದ್ದಾರೆ.ಭಾರತದಲ್ಲಿ ಪಶ್ಚಿಮ ಘಟ್ಟ, ಪೂರ್ವ ಘಟ್ಟಗಲ್ಲಿ ಇದು ಕಂಡುಬಂದಿದೆಯಂತೆ.

PHOTO HTTP://STEVEAXFORD.SMUGMUG.COM 

ಹಾಗಾದರೆ ನಮ್ಮ ಕಾಡಿನಲ್ಲಿರುವವು ಬೆಳಕು ಚೆಲ್ಲುವುದು ಇದೆ ಕಾರಣಕ್ಕೆ? ಸರಿಯಾಗಿ ಗೊತ್ತಿಲ್ಲ. ವಿಚಿತ್ರಯವೆಂದರೆ  ಮರದ ಬೇರುಗಳಲ್ಲಿ ಇರುವ mycelium fungi  ಕೂಡ ಮಣ್ಣಿನ ಅಡಿಯಲ್ಲಿ ಇದೆ ರೀತಿ ವರ್ತಿಸುತ್ತದೆಯಂತೆ. ಇದರ ಉತ್ತರ ಇನ್ನೂ ದೊರೆತಿಲ್ಲ. ಕೆಲವು ವಿಜ್ಞಾನಿಗಳು ಹೇಳುವುದೇನೆಂದರೆ ಇವು ಎಲ್ಲವೂ ಬೇರೆ ಬೇರೆ ಕಾರಣಗಳಿಗಾಗಿಯೇ ಬೆಳಕು ಹೊಮ್ಮಿಸುವ ಹಾಗೆ ರೂಪುಗೊಂಡಿವೆ ಎಂದು. 

ನಾನು ಈ fungi  ಗೆ radium ಪಾಚಿ ಎಂದು ಕರೆಯುತ್ತಿದೆ. radium  ಹಾಗೆಯೇ ಹೊಳೆಯುತ್ತವೆಯಲ್ಲ ಅದಕ್ಕೆ. ಅಂದಹಾಗೆ ನನಗೊಂದು  ಅನುಮಾನ : ಕೊಳ್ಳಿದೆವ್ವ ಕಾದಲ್ಲಿ ಕೊಳ್ಳಿ ಹಿಡು ಓಡಾಡುತ್ತದೆ ಎನ್ನುತ್ತಾರಲ್ಲ, ಆ ಕೊಳ್ಳಿದೆವ್ವ ಇದೇ ಆಗಿರಬಹುದೆ? ನನಗಂತೂ ಗೊತ್ತಿಲ್ಲ, ನಿಮಗೆ ಗೊತ್ತಿದ್ದರೆ ತಿಳಿಸಿ.  



Comments

  1. Wow Vanya!!! Bioluminescence is soo intriguing! I really learnt a lot from your post! I am surely going to be doing more research on it ;)
    Have a wonderful day! :)

    ReplyDelete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ