Skip to main content

Posts

Showing posts with the label Young Change Makers

ಹವಾಗುಣ ಬದಲಾವಣೆ ವಿರುದ್ಧದ ಮಕ್ಕಳ ಸೈನ್ಯ : Fridays for Future

ಯಾರಾದರೂ ಹಿರಿಯರನ್ನು ಕೇಳಿ,ಅವರು ಚಿಕ್ಕವರಿದ್ದಾಗ  ಎಂದಾದರೂ ಮಾಲಿನ್ಯದ ಕಾರಣದಿಂದ  ಶಾಲೆಗಳಿಗೆ  ರಜೆ ನೀಡಲಾಗಿತ್ತೆ ಎಂದು. ಅಥವಾ ನೀವೆ ಹಿರಿಯರಾಗಿದ್ದರೆ ನೀವೆ ಹೇಳಿ , ನೀವು ಚಿಕ್ಕವರಿದ್ದಾಗ ಇದ್ದ ಪರಿಚಿತ ಜೀವಿಗಳು ಇಂದು ನಮಗೇಕೆ ನೋಡಲು  ಸಿಗುತ್ತಿಲ್ಲ?  ನೀವು ಚಿಕ್ಕವರಿದ್ದಾಗ ಎಂದಾದರೂ ಮಲೆನಾಡಿನಲ್ಲಿ ನೀರಿಗೆ ಬರಗಾಲ ಬಂದಿತ್ತೆ? ಇಲ್ಲ ತಾನೆ? ಆದರೆ ಇವೆಲ್ಲವೂ ಇಂದು ನಡೆಯುತ್ತಿದೆ ಹಾಗು ನಿಮ್ಮ ಮುಂದಿನ ತಲೆಮಾರಿನ ನಾವು ಇವೆಲ್ಲಕ್ಕೂ  ಸಾಕ್ಷಿಯಾಗಿದ್ದೇವೆ.   ನಮ್ಮ ಮನೆಯಲ್ಲಿಯೆ ಈ ಬಾರಿ ಒಂದು ದಿನಕ್ಕೆ ೩೧೫ಮೀಮೀ ಮಳೆ ಬಂದಿತ್ತು. ಇಷ್ಟು ವರ್ಷ ಜೂನ್ ನಲ್ಲಿ ಬರುತ್ತಿದ್ದ ಮಳೆ ತಡವಾಗುತ್ತಿದೆ. ಕೊಲಾರದಲ್ಲಿ ನೀರಿಗಾಗಿ ೧.೬  ಕೀಮೀ ಬೋರ್ವೆಲ್ಲ್ ಹೊಡೆಯುವ ಪರಿಸ್ಥಿತಿ ಬಂದಿದೆ. ಪ್ರತಿವರ್ಷ ಪ್ರವಾಹದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನಲ್ಲಿ ಇದ್ದ ಕೆರೆಗಳ ಮೇಲೆ ಕಟ್ಟಡಗಳು ಬಂದು ಕುಳಿತಿವೆ ನೀವೆಲ್ಲರೂ ನಮಗೆ ಪಾಠ ಮಾಡುತ್ತೀರಿ, ಮರ ಕಡಿಯಬಾರದು, ನೀರನ್ನು ಹಿತಮಿತವಾಗಿ ಬಳಸಬೇಕು,ದುರಾಸೆ ಪಡಬೇಡ, ಪರಿಸರ ರಕ್ಷಣೆ ಮಾಡಬೇಕು ಎಂದು. ಆದರೆ ಯೋಚಿಸಿ ದೊಡ್ಡವರೆ, ನೀವೇನು ಮಾಡುತ್ತಿದ್ದೀರಿ? ನೀವು ನಿಮ್ಮ ಮುಂದಿನ ತಲೆಮಾರಿಗೆ ಏನು ಉಳಿಸುತ್ತಿದ್ದಿರಿ? ಬೋಳು ಗುಡ್ಡಗಳನ್ನೆ? ಕರಗಿದ ಹಿಮಕವಚಗಳನ್ನೆ? ಬಿಸಿಯಾದ ವಾತಾವರಣವನ್ನೆ?  ನಾವು ಮಾನವರ ದುರಾಸೆಯಿಂದ ಏನೆಲ್ಲಾ ಆಗ...

ಮಂಜಿನ ನಡುವೆ ಮೇಲೆದ್ದ ಬೆಂಕಿಯ ಕಿಡಿ : ಮಲಾಲ

೨೦೧೨ ಅಕ್ಟೋಬರ್ ೯ , ತಾಲಿಬಾನಿ ಉಗ್ರನೊಬ್ಬ ೧೪ ವರ್ಷ ವಯಸ್ಸಿನ ಮಲಾಲ ಯುಸಫ಼ೈಜಿಯಾ ಎಂಬ ಹುಡುಗಿಯ ತಲೆಗೆ ಹೊಡೆದ ಒಂದು ಗುಂಡು ಪ್ರಪಂಚದ ಸಾವಿರಾರು ಶಿಕ್ಷಣ ವಂಚಿತ ಮಕ್ಕಳು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವಂತೆ ಮಾಡಿತು. ಜಗತ್ತಿಗೆ ಅನಾಮಿಕಳಾಗಿದ್ದ ಇದೇ ಮಲಾಲಳಿಗಾಗಿ ಜಗತ್ತು ಪ್ರಾರ್ಥಿಸಿತ್ತು. ಮಲಾಲ ಈಗ ಬರಿ ಹೆಸರಾಗಿ ಉಳಿದಿಲ್ಲ . ಆಕೆ ಒಬ್ಬ ಶಕ್ತಿಯಾಗಿದ್ದಾಳೆ. ತನ್ನ ಹುಟ್ಟಿದ ಊರಾದ ಸ್ವಾತ್ ಕಣಿವೆ ತಾಲಿಬಾನಿ ಆಕ್ರಮಿತ ಪ್ರದೇಶವಾಗಿದ್ದರೂ , ಜನರು ತಲೆಯೆತ್ತಿ ನೋಡಲೂ ಭಯಪಡುತ್ತಿದ್ದ ಸಮಯದಲ್ಲಿ ಅದೇ ತಾಲಿಬಾನಿಗಳ ವಿರುದ್ಧ ದನಿಯೆತ್ತಿ ಮಾತಾಡಿದ ಹುಡುಗಿ ಈಕೆ. ಕೇವಲ ೧೧ ವರ್ಷದವಳಾಗಿದ್ದಾಗ ಪಾಕಿಸ್ತಾನದ ಪೇಶಾವರದ ಪ್ರೆಸ್ ಕ್ಲಬ್ ನಲ್ಲಿ " ಮೂಲಭೂತ ಹಕ್ಕಾದ ಶಿಕ್ಷಣವನ್ನು ನಮ್ಮಿಂದ ಕಿತ್ತುಕೊಳ್ಳಲು ಆ ತಾಲಿಬಾನಿಗಳಿಗೆ ಎಷ್ಟು ಧೈರ್ಯ? " ಎಂದು ಪ್ರಶ್ನಿಸಿದ್ದಳು.    ಬಿಬಿಸಿ ಪತ್ರಿಕೆಗಾಗಿ ಸ್ವಾತ್ ಕಣಿವೆಯ ಪರಿಸ್ಥಿತಿ ಬಗ್ಗೆ ಗುಲ್ಮಕೈ ಎಂಬ ಗುಪ್ತ ನಾಮದಲ್ಲಿ ದಿನಚರಿ ಬರೆಯುತ್ತಿದ್ದ ಈಕೆ ಮತ್ತು ಅವಳ ತಂದೆ ಅದಾಗಲೆ ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅವಳ ತಂದೆ ಜೀಯುದ್ದೀನ್ ಯುಸಫ಼ೈಜಿಯ  ಶಿಕ್ಷಣ ತಜ್ಞ ರಾಗಿ, ಖುಶಾಲ್ ಎಂಬ ಶಾಲೆಗಳನ್ನು ನಡೆಸುತ್ತಿದ್ದವರು. ಮಲಾಲಾಳೆ ಹೇಳುವಂತೆ ಅವಳ ತಂದೆ ಅವಳಲ್ಲಿ ಬತ್ತದ ಸ್ಥೈರ್ಯವನ್ನು ತುಂಬಿದವರು. ಬಿಬಿಸಿ ಯಲ್ಲಿ ಬರೆಯುತ್ತಿದ್ದ ದಿನಚರಿ ಪ...