Skip to main content

ಭೂಮಿಯ ಜ್ವರಕ್ಕೆ ಔಷಧಿ ಕೊಡುವ ಸಮಯ!

"The greatest threat to our planet is the belief that someone else will save it.  - Robert Swan 


ಭೂಮಿಗಿರುವ ಅತ್ಯಂತ ದೊಡ್ಡ ಸಂಕಷ್ಟ ಎಂದರೆ ಅದು ಭೂಮಿಯನ್ನು ಮತ್ತೊಬ್ಬರು ಉಳಿಸುತ್ತಾರೆ ಎಂಬ ನಿರ್ಲಕ್ಷ್ಯ ಭಾವ - ರಾಬರ್ಟ್ ಸ್ವಾನ್   


 
ನಮ್ಮ ದೇಹದ ತಾಪಮಾನ ಎರಡು ಡಿಗ್ರೀ ಹೆಚ್ಚಾದರೆ ನಮಗೇನಾಗಬಹುದು? ಹೆಚ್ಚೆಂದರೆ ಸಣ್ಣ ಜ್ವರ ಬರಬಹುದಷ್ಟೇ. ಆದರೆ ಭೂಮಿಯ ತಾಪಮಾನ ಇನ್ನೂ 2  ಡಿಗ್ರೀ Celcius ಹೆಚ್ಚಾದರೆ..? ನಾವು ಮತ್ತೆ ಭೂಮಿಯನ್ನು ಸುಸ್ಥಿತಿಗೆ ತರಲಾರದ ಸ್ಥಿತಿಗೆ ಹೋಗಿಬಿಡಬಹುದು! ಸಮುದ್ರ ಮಟ್ಟ ಹೆಚ್ಚಾಗಿ, ಅನೇಕ ದ್ವೀಪಗಳು ಮುಳುಗಿ ಹೋಗಬಹುದು,ಕರಾವಳಿ ಇಲ್ಲವಾಗಬಹುದು. ಪ್ರವಾಹ ಗಳು (ಇನ್ನೂ) ಹೆಚ್ಚಾಗಬಹುದು.ಇವೆಲ್ಲವೂ ನೂರಾರು ವರ್ಷಗಳ ನಂತರ ಆಗುವಂತದ್ದಲ್ಲ. 

ಈಗ ಆಗುತ್ತಿರುವಂತದ್ದು. ಭೂಮಿಯ ತಾಪಮಾನವನ್ನು 1.5  ಡಿಗ್ರೀ celsius ನಲ್ಲಿಯೇ ನಿಯಂತ್ರಿಸದಿದ್ದರೆ ಇವೆಲ್ಲವೂ ಆಗುತ್ತದೆ. 

  

ಇದೇ ಉದ್ದೇಶದಿಂದಲೇ   ಪ್ಯಾರಿಸ್ ಅಗ್ರೀಮೆಂಟ್ ಮಾಡಿದ್ದು .ಈ ಪ್ಯಾರಿಸ್ ಅಗ್ರೀಮೆಂಟ್ ಗೆ ಈಗ 5 ವರ್ಷ. 5 ನೇ ವರ್ಷದ ಸಲುವಾಗಿ ಮೊನ್ನೆ ನ್ಯೂಸ್ ಚಾನೆಲ್ ಒಂದರಲ್ಲಿ ಇದರ ಬಗ್ಗೆ ಕಾರ್ಯಕ್ರಮವೊಂದು ಪ್ರಸಾರವಾಗುತ್ತಿತ್ತು. ಇದೇನಿದು ಎಂದು ಪ್ಯಾರಿಸ್ ಅಗ್ರೀಮೆಂಟ್  ಬಗ್ಗೆ ಕುತೂಹಲದಿಂದ ಒಂದಿಷ್ಟು ಹುಡುಕಿದೆ.ಹೀಗೆ ಹುಡುಕಾಡುವಾಗ ಸಿಕ್ಕಿದ್ದು #Fightfor1Point5 ಚಳುವಳಿ. ಮೊದಲು ಸುಮಾರು ಒಂದು ತಿಂಗಳ ಹಿಂದೆಯೇನೋ ಇದರ ಬಗ್ಗೆ ಕೇಳಿದ್ದೇನಾದರೂ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಕೊನೆಗೆ ಹಲವಾರು ಹುಡುಕಾಟಗಳ ನಂತರ ಇದು Fridays For Future ಸಂಘಟನೆಯದದೇ ಒಂದು ಭಾಗ ಎಂದು ತಿಳಿಯಿತು.ಈ ಚಳುವಳಿಯ ಉದ್ದೇಶ ಭೂಮಿಯನ್ನು 1.5 ಡಿಗ್ರೀ Celsius ತಾಪಮಾನಕ್ಕಿಂತ ಮೇಲೆ ಹೋಗದಂತೆ ತಡೆಯಬೇಕು ಎಂದು.ಅಗ್ರೀಮೆಂಟ್ ಗೆ ಬರೀ ಸಹಿ ಹಾಕುವುದಷ್ಟೇ ಅಲ್ಲ, ಸ್ವಲ್ಪ  ತಾಪಮಾನ ನಿಯಂತ್ರಿಸುವ ಕೆಲಸವನ್ನೂ ಮಾಡಿ ಎಂಬುದು ಇವರ ಬೇಡಿಕೆ.


ಅಷ್ಟಕ್ಕೂ ಈ ಪ್ಯಾರಿಸ್ ಅಗ್ರೀಮೆಂಟ್ ಎಂದರೆ ಏನು?: 2015 , ಡಿಸೆಂಬರ್ 12 ರಂದು 194 ದೇಶಗಳು ಈ ಪ್ಯಾರಿಸ್ ಅಗ್ರೀಮೆಂಟ್ ಗೆ ಸಹಿ ಹಾಕಿದವು.ಈ ಅಗ್ರೀಮೆಂಟ್ ನ ಮುಖ್ಯ ಉದ್ದೇಶ Climate Change ನಿಂದ ತಾಪಮಾನ ಹೆಚ್ಚಾಗದಂತೆ ತಡೆಯುವುದು. ಅಂದರೆ 1.5 ಡಿಗ್ರೀ celsius  ಮೇಲೆ ಹೋಗದಂತೆ ತಡೆಯುವುದು.ಇದೆ ಅಗ್ರೀಮೆಂಟ್ ನ ಕಾರಣದಿಂದಲೇ ಈ ಚಳುವಳಿ ಶುರುವಾದದ್ದು. ಒಂದು ಡಿಗ್ರೀ ಹೆಚ್ಚಾದರೆ ಏನು ಆಗುವುದಿದೆ ಎಂದು ಉದಾಸೀನ ಮಾಡುವ ಕಾಲವಲ್ಲ ಇದು. ಒಂದುವೇಳೆ 2040ರ ವೇಳೆಗೆ 2 ಡಿಗ್ರೀ celsius ಹೆಚ್ಚಾಗಿಬಿಟ್ಟರೆ ಎನಾಗಬಹುದು ಎಂಬ ಪರಿಣಾಮಗಳ ಪಟ್ಟಿಯನ್ನು ವಿಜ್ನಾನಿಗಳು ಕೊಟ್ಟಿದಾರೆ. 

  1. ಮೊದಲೇ ಹೇಳಿದ ಹಾಗೆ ಭೂಮಿಯಲ್ಲಿನ 70% ಕರಾವಳಿ ತೀರಗಳ ಹತ್ತಿರ   ಸಮುದ್ರಮಟ್ಟ ಸುಮಾರು 0.66 feet ಅಂದರೆ 0.2 ಮೀಟರ್ ಏರುತ್ತದೆ. 

  2. ಪ್ರವಾಹಗಳು,ಸೂನಾಮಿಗಳು,ಮಣ್ಣಿನ ಸವಕಳಿ ಮುಂತಾದ ಸಮಸ್ಯೆಗಳಾಗುತ್ತದೆ. 

  3. ನೀರಿನಲ್ಲಿ ಲವಣಾಂಶ ಇನ್ನೂ ಹೆಚ್ಚಾಗುತ್ತದೆ. 

  4. ಅಂಟಾರ್ಕ್ಟಿಕದಲ್ಲಿ ಹಿಮಕುಸಿತ ಇನ್ನೂ ಹೆಚ್ಚಾಗುತ್ತದೆ ಮತ್ತು ಇದು ಮೊದಲು ಹೇಳಿದ  ಸಮುದ್ರಮಟ್ಟ ಹೆಚ್ಚಾಗಳು ಕಾರಣವಾಗುತ್ತದೆ.

  5. ಸಮುದ್ರದ ಮತ್ತು ನೀರಿನ ನೈಸರ್ಗಿಕ ಚಕ್ರ ಏರುಪೇರಾಗುತ್ತದೆ. ಅಂದರೆ ನೀರಿನ ಕೆಳಭಾಗದಲ್ಲಿ ಇರುವ ಜೀವಿಗಳು ಸ್ವಲ್ಪ ಮೇಲೆ ಬಂದು ಜೀವಸಬಹುದು. ಹೀಗಾದರೆ ಕ್ರಮೇಣ ಸಮುದ್ರ ಜೀವಿಗಳ ಆಹಾರ ಕ್ರಮ ವ್ಯತ್ಯಾಸವಾಗಿ, ಇವು ನಶಿಸಿಯೂ ಹೋಗಬಹುದು. 

ಇನ್ನು ಒಂದು ಡಿಗ್ರೀ ಹೆಚ್ಚಿಗೆಯಾದರೂ ಮನುಷ್ಯರ ಸಾಮಾಜಿಕ ಜೀವನದಲ್ಲಿ ಇದು ಪರಿಣಾಮ ಬೀರಬಹುದು ಎನ್ನುತ್ತಾರೆ.

  1. ಇದು ಮನುಷ್ಯರಲ್ಲಿ ಬಿಸಿಲಿಂದ ಹೆಚ್ಚಾಗುವ ಕಾಯಿಲೆ ಗಳನ್ನು ತರಬಹುದು. 

  2. ಮಲೇರಿಯಾ,ಚಿಕನ್ಗುನ್ಯಾ , ಡೆಂಗೀ ಮುಂತಾದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆಯಂತೆ. 

  3. ಆಹಾರ ಭದ್ರತೆ ಕಡಿಮೆಯಾಗಬಹುದು. ಅದರಲ್ಲೂ ಪೂರ್ವ ಆಫ್ರಿಕಾ, ಮಧ್ಯ ಯುರೋಪ್  ಮತ್ತು ದಕ್ಷಿಣ ಅಮೆರಿಕ ದಲ್ಲಿ ಈ ಸಮಸ್ಯೆ ಬರಬಹುದು. ಜೊತೆಗೆ ನಮ್ಮ ಬೆಳೆಗಳಾದ ಭತ್ತ,ಗೋಧಿ,ಜೋಳಗಳಲ್ಲಿ ಸುಮಾರು 5% ನಷ್ಟು ಪೌಷ್ಟಿಕಾಂಶ ಕಡಿಮೆಯೂ ಆಗಬಹುದು. 

  4. ಮುಂದುವರೆದ ದೇಶಗಳಲ್ಲಿ ಆರ್ಥಿಕ ಕುಸಿತವಾಗಬಹುದು. 


ಮೊದಲಿನದಲೂ ನಮಗೆ ಪರಿಹಾರ ಕೈಯಲ್ಲಿಯೇ ಇದೆ. ಆದರೆ ಅದನ್ನು ನಾವು ಕಣ್ಣು ತೆರೆದು ನೋಡಬೇಕಷ್ಟೆ. ನಾವು ಭೂಮಿಗಾಗಿ ಸ್ವಲ್ಪ ತ್ಯಾಗ ಮಾಡಲು ಸಿದ್ಧರಿರಬೇಕಷ್ಟೆ. 

  • ಆಹಾರ ತ್ಯಾಜ್ಯವನ್ನು ಕಡಿಮೆ ಮಾಡಬೇಕು. 

  • ಹೆಚ್ಚು ಹೆಚ್ಚು ಸಾರ್ವಜನಿಕ ಸಾರಿಗೆಯನ್ನೇ ಬಳಸಬೇಕು. ಅಥವಾ ಪರ್ಯಾಯ ಇಂಧನಗಳನ್ನು ಬಳಸಬೇಕು. 

  • ಶಕ್ತಿಯನ್ನು ಉಳಿಸಬೇಕು. ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡುವುದನ್ನು ನಿಲ್ಲಿಸಬೇಕು. 

  • ಯಾವಾಗಲೂ ಹೇಳುವಂತೆ ಕೊಳ್ಳುಬಾಕತನಕ್ಕೆ ಸ್ವಲ್ಪವಾದರೂ ಕಡಿವಾಣ ಹಾಕಬೇಕು. 

ಇವು ನಾವು ವೈಯಕ್ತಿಕವಾಗಿ ಮಾಡುವಂತದ್ದು. ಆದರೆ ಸಾಮೂಹಿಕವಾಗಿ ಮಾಡುವಂತಹ ಬದಲಾವಣೆಗಳೂ ಇವೆ.
  • ಕಾಡುಗಳನ್ನು  ಪುನರುಜ್ಜೀವನಗೊಳಿಸಬೇಕು

  • ಕೈಗಾರಿಕೆಗಳಲ್ಲಿ ಕಾರ್ಬನ್ ಹೊಮ್ಮಿಸುವಿಕೆಯನ್ನು ಕಡಿಮೆ  ಮಾಡಬೇಕು. 

  • ಕೈಗಾರಿಕೆಗಳಲ್ಲಿ ತ್ಯಾಜ್ಯವನ್ನು ಕಡಿಮೆ ಮಾಡಬೇಕು.

 ಇದು ನಾವೆಲ್ಲರೂ ಮಾಡಬಹುದಾದ ಅಳಿಲು ಸೇವೆಯಷ್ಟೆ. ನಮ್ಮ ಮುಂದಿನ ಭವಿಷ್ಯಕ್ಕಾಗಿ ನಾವು ಇಷ್ಟಾದರೂ ಮಾಡಲೇ ಬೇಕು. ಭೂಮಿಯಲ್ಲಿ ಒಂದುವೇಳೆ ಜೀವಸಂಕುಲ ನಾಶವಾದರೆ ಮತ್ತೆ ಭೂಮಿ  ಅದನ್ನು ಮರುಸ್ಥಾಪಿಸಿಕೊಳ್ಳುತ್ತದೆ. ಆದರೆ ಮನುಷ್ಯ ನಾಶವಾದರೆ?ನಾವು ನಮ್ಮನ್ನು ಮತ್ತೆ ಮರುಸ್ಥಾಪಿಸಿಕೊಳ್ಳಬಲ್ಲವೇ? ನಾವು ಇದನ್ನು ಬರೀ ಭೂಮಿಗಾಗಿಯಷ್ಟೆ ಅಲ್ಲ, ನಮಗಾಗಿಯೂ ಮಾಡಬೇಕು.ಭೂಮಿಗೆ ಜ್ವರ ಬಂದಿದೆ. ಬಂದಿರುವ ಜ್ವರಕ್ಕೆ ಔಷದಿ ನಾವೇ ಕೊಡೋಣವೆ?

ನಾವು ಬದಲಾಗಬೇಕು, ಹವಾಮಾನವಲ್ಲ...


Please fill up this blog Survey



Comments

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ