Skip to main content

ಮಳೆಗಾಲ ಶುರುವಾತು!

''ನಿಮ್ಮನೆ ಹತ್ರ ಮಳೆ ಶುರುವಾತ? ನಂಗಳ ಬದಿಗೆ ಈಗಲೇ ಶುರು ಆಗೋಜು. ಹಪ್ಪಳ ಇನ್ನೂ ಒಣಗಿತ್ತಿಲ್ಲೇ, ಈಗಲೇ ಶುರುವಾಗೋತು ಮಳೆ. '' 

ಮೊನ್ನೆ ಯಾರೋ ಮನೆಗೆ ಬಂದಾಗ ಹೇಳುತಿದ್ದ ಮಾತುಗಳಿವು. ಹೌದು, ಅದಾಗಲೇ ಮಳೆಗಾಲ ಅನ್ ಅಫೀಷಿಯಲ್ ಆಗಿ ಶುರುವಾಗಿ ಬಿಟ್ಟಿದೆ. ಇದು ಅಸಹಜವೆ ಆದರೂ, ನಮ್ಮಲ್ಲಿ ಮಳೆಗಾಲದ ಸ್ವಾಗತಕ್ಕೆ ಎಲ್ಲಾ ತಯಾರಿ ನಡೆಯುತ್ತಿದ್ದಾಗಲೇ ಮಳೆ ಶುರುವಾಗಿದೆ.

ಮಳೆ ಜಿರಲೆ( cicada ) ಗಳ ಸದ್ದು ಸಂಜೆಯಾಗುತ್ತಿದ್ದಂತೆ ಶುರುವಾದರೆ, ಮಳೆಗಾಲ ಶುರುವಾತು ಎಂದರ್ಥ. ಮೊದಲ ಮಳೆಯಲ್ಲಿ ನೆಲ ತೊಯ್ದಾಗ ಬರುವ ಮಣ್ಣಿನ ಸುಗಂಧ (ಇದನ್ನು petrichor ಎನ್ನುತ್ತಾರಂತೆ ).. ಎಲ್ಲವೂ ಚೆನ್ನ. 

ಶಾಲೆಗಳು ಈಗ ತೆರೆದಿದ್ದರೆ, ಇಷ್ಟು ಹೊತ್ತಿಗೆ ಹೊಸ ಬ್ಯಾಗ್ , ಪುಸ್ತಕ ಎಂದೆಲ್ಲಾ ಪೇಟೆಗೆ ಓಡಾಟ ಶುರುವಾಗುತ್ತಿತ್ತು. ಜೊತೆಗೆ ರಜೆಯಲ್ಲಿ ಕೊಟ್ಟಿದ್ದ ಹೋಂವರ್ಕ್ ಮುಗಿಸುವ ಕೆಲಸವೂ ಶುರುವಾಗಿರುತಿತ್ತೇನೋ. ಆದರೆ ಈ ಬಾರಿ ಅದೇನೂ ಇಲ್ಲವಲ್ಲಾ. 

ಮಳೆಗಾಲ ಎಂದರೆ ಕಾಡು ಹೂಗಳ ಸಮಯ. ಈಗ ಸೀತಾಳೆ (orchid ) ಅಥವಾ ಸೀತೆ ದಂಡೆ ಹೂವು ಅರಳುವ ಸಮಯ. ರಾಮಾಯಣದ ಸೀತೆ ವನವಾಸದಲ್ಲಿದ್ದಾಗ ಈ ಹೂವನ್ನು ಮುಡಿದು ಹಾಲು ಕಾಯಿಸಿದ್ದಳು ಎಂದೂ, ಅದಕ್ಕಾಗಿ ಈ ಹೂವಿಗೆ ಹಾಲಿನ ಪರಿಮಳ ಇದೆಯೆಂದು ಕತೆಯಿದೆ. ಶಾಲೆಯಲ್ಲಿ ಯಾವ ತರಗತಿಯ ಬಾಗಿಲಿಗೆ ಹೆಚ್ಚು ಸೀತೆ ದಂಡೆ ಇರುತ್ತದೆ ಎಂದು   ನೋಡುವುದೇ ಖುಷಿ. 


ಈ ಸೀತಾಳೆಯಲ್ಲಿಯೇ ಎರಡು ಮೂರು ವಿಧ. ಸೀತೆ ದಂಡೆ , ಗೋಪಿ ದಂಡೆ, ದ್ರೌಪದಿ ದಂಡೆ .. ಹೀಗೆ ಹತ್ತಾರು ವಿಧ. ಜೊತೆಗೆ ಹೆಸರಿಲ್ಲದ ಹಲವು orchid ಗಳೂ ಹೇರಳವಾಗಿ ಸಿಗುತ್ತವೆ. 
ಈ orchid ಗಳು ಸಿಕ್ಕರೆ ಅವುಗಳ ಗಿಡವನ್ನು ತಂದು ಯಾವುದಾದರೂ ಒಂದು ಮರದ ಮೇಲೆ ಇದುವ ಖುಷಿಯೇ ಬೇರೆ. 

  ಕಳೆದ ವರ್ಷ ಮಳೆಗಾಲದಲ್ಲಿ ಕಾಡಿಗೆ ಹೋದಾಗ, ಒಂದು ಹೊಸ ರೀತಿಯ orchid  ಕಂಡಿತ್ತು. ಅದನ್ನು ತಂದು ಮರದ ಮೇಲೆ ಹಾಕಿಟ್ಟಿದ್ದೆ. ಈ ವರ್ಷ ಅಂತೂ ಹೂ ಬಿಟ್ಟಿದೆ. ಇದರ ಹೆಸರೇನು ಎಂದೇನೂ ತಿಳಿದಿಲ್ಲ. ಗೂಗಲ್ ಮೊರೆ ಹೋದಾಗಲೂ ಯಾವುದು ಇದು ಎಂದು ತಿಳಿಯಲಿಲ್ಲ. ಬದಲಾಗಿ ನೂರಾರು ಚಿತ್ರಗಳನ್ನು ತೋರಿಸಿ ಕನ್ಫ್ಯೂಸ್ ಮಾಡಿಬಿಟ್ಟಿತು. ನಿಮಗೆ ಗೊತ್ತಿದ್ದರೆ ತಿಳಿಸಬಹುದು.ಅಂದ ಹಾಗೆ ಈ ಸಮಯದಲ್ಲಿ ಹಣ್ಣುಗಳಿಗೇನೂ ಕೊರತೆಯಿಲ್ಲ. ಬಿಕ್ಕೆ ಹಣ್ಣು ಈ ಸಮಯದ ಸೆಲಿಬ್ರಿಟೀ ಹಣ್ಣು. ಜೊತೆಗೆ ಹುಳಿ ಸಿಹಿ ರುಚಿಯ ಸಳ್ಳೆ ಹಣ್ಣು , ಸಂಪಿಗೆ ಹಣ್ಣು ಎಲ್ಲವೂ ಸಿಗುತ್ತದೆ. ಈಗ ಬರೀ ಆರ್ಕಿಡ್ ಗಳ ಕಾಲವಲ್ಲ, ಇಲ್ಲಿ ಡೇರೆ (Daliya) ಹೂಗಳ ಮೇಳವೂ ನಡೆಯುತ್ತಿರುತ್ತದೆ. ಎಲ್ಲೆಯರ ಮನೆಯ ಮುಂದೆಯೂ ಹತ್ತಾರು ಬಣ್ಣಗಳ ಹೂವುಗಳ ಸಂತೆಯೇ ನೆರೆದಿರುತ್ತದೆ. ಪಟ್ಟಣಗಳಲ್ಲಿ ಹೂಗಳ ಮೇಳವೂ ನಡೆಯುತ್ತದೆ. ಮಳೆಗಾಲ ಬಂದರೆ ಭೂಮಿಗೆ ಜೀವ ಬಂದ ಹಾಗೆ ಅನಿಸುತ್ತದೆ. ರಾತ್ರಿಯಲ್ಲಿ ಮಳೆ ಜೀರಲೆಗಳ ಸಂಗೀತ, ಹಗಲಲ್ಲಿ ಕಪ್ಪೆಗಳ ಹಾಡು. ಇದೊಂದು ರೀತಿಯ 24/7 ಸಂಗೀತ ಕಛೇರಿಯೆ ಸರಿ!

ನಾವು ಮಳೆಗಾಲವನ್ನೂ  ಹಬ್ಬದಂತೆ ಆಚರಿಸುತ್ತೇವೆ. ಇದು ಮಲೆನಾಡಿನವರ ಪಾಲಿಗೆ ನಿಜವಾದ ಹಬ್ಬ. ಎಲ್ಲಿ ನೋಡಿದರೂ ಜನ ಕೃಷಿ ಕೆಲಸ ಮಾಡುತ್ತಲೋ, ಅಥವಾ ಹಿತ್ತಲು ನೋಡಿಕೊಳ್ಳುತ್ತಲೋ, ಯಾವ ಕೆಲಸವೂ ಇಲ್ಲದಿದ್ದರೆ, ಬೆಂಕಿಯ ಮುಂದೆ ಕುಳಿತು, ಗೇರುಬೀಜ, ಹಪ್ಪಳ, ಹಲಸಿನ ಬೀಜ ಸುಟ್ಟು ತಿನ್ನುತ್ತಲಾದರೂ ಇರುತ್ತಾರೆ. ಮಳೆಗಾಲದ ಶುರು ಎಂದರೆ ಎಂತದೋ ಖುಷಿ. ಈಗ ಬಂದಿರುವ ಮಳೆ ತೌಕ್ತೆ ಚಂಡಮಾರುತದ ಪ್ರಭಾವ ವಾದರೂ, ಮಳೆ ಮಳೆಯೇ ತಾನೇ. ತೌಕ್ತೆ ಎಂದರೆ ಮಯನ್ಮಾರ್ ನ ಒಂದು ಸುಂದರ ಓತಿಕ್ಯಾತ ದ ಹೆಸರಂತೆ. 


ಇನ್ನೇನು, ಒರಿಜಿನಲ್ ಮಳೆಗಾಲದ ಸಮಯ ಹತ್ತಿರ ಬಂದಿದೆ. So Welcome to the colourful time of  Monsoon!

Comments

  1. The monsoon season is just so soothing and beautiful! It has started to rain where I live, and all the plants look lush and green! The other awesome part about monsoon is staying cozy and eating hot food😝. I love the pics that you've added :)
    Great post <3

    ReplyDelete
    Replies
    1. Yup.Eating hot food is the best part, I agree. Thanks for reading Maith

      Delete

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ