Skip to main content

ಬೆಕ್ಕು v/s ಅಮ್ಮ

ಪುರಾತನ ನಾಗರೀಕತೆಗಳಲ್ಲಿ ಬೆಕ್ಕನ್ನು  ದೇವರೆಂದು ಪೂಜಿಸುತ್ತಿದ್ದರಂತೆ. ಈಗ ನೋಡಿದರೆ ನಮ್ಮ ಬೆಕ್ಕುಗಳು ಅದನ್ನಿನ್ನು ಮರೆತಿಲ್ಲವೆಂದು ಕಾಣುತ್ತದೆ. 
ಈ ಮಾರ್ಜಾಲಗಳು  ತಾವೆ ಮನುಷ್ಯರನ್ನು ಆಳುವವರು ಎಂದು ತಿಳಿದಿರುವಂತಿದೆ. ಅಷ್ಟಕ್ಕೂ ಆಗಿದ್ದೇನು ಎಂದರೆ ನಮ್ಮ ಮನೆಯ ಬೆಕ್ಕು ಮತ್ತು ನನ್ನ ಅಮ್ಮನ ಕಾಳಗ. ಈ ಕಾಳಗವು ಸರ್ವವ್ಯಾಪಿಯೇ  ಎಂದೇನೂ ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿಬಿಡಿ. 

 ನಾವು ಬೆಕ್ಕನ್ನು ತಂದಿದ್ದೇ ಇಲಿ ಹಿಡಿಯಲು ಬರಬಹುದು ಎಂಬ ಏಕೈಕ ನೆಪ ಕೊಟ್ಟು.ತಂದ ಮೊದಲ ಬೆಕ್ಕು ಒಂಥರಾ ರಾಯಲ್ ಕ್ಯಾಟ್ ಹಾಗೆಯೇ ಇತ್ತು. ಇಲಿ ಹೆಗ್ಗಣಗಳ ಮೇಲೆ ಸಂಪೂರ್ಣ ಹಿಡಿತ ಇದ್ದಿದ್ದರೂ ಅಮ್ಮ ಮಾತ್ರ "ಊರು ತಿರುಗ್ತು " ಎಂದು ಬೈದುಕೊಂಡಿದ್ದಳು. ತರುವಾಗ  ಮುದ್ದಾಗಿ ಇದೆ ಎಂದು ಆರ್ಕಿಡ್(ಸೀತಾಳೆ ಹೂವು) ಎಂದು ಹೆಸರು ಕೊಟ್ಟೆ. ನಂತರ ಗೊತ್ತಯಿತು ಇದು ಪೇಟೆಯ ಆರ್ಕಿಡ್  ಅಲ್ಲ ,ಪಕ್ಕಾ Wild  ಆರ್ಕಿಡ್ ಎಂದು. ಮನೆಯ ಬಳಿ   
ಬರುವ ಕಳ್ಳ ಬೆಕ್ಕುಗಳ ಜೊತೆಗೆ ಜಗಳ ಕಾಯುವುದು ಇದರ ಅತೀ ಪ್ರಿಯ ಕೆಲಸ. ಜೊತೆಗೆ ನನ್ನ ಫೋಟೊಗಳ ಮಾಡೆಲ್ ಇವಳು. ತರತರವಾಗಿ ಅದನ್ನು ಹಿಡಿದು ಕುಳ್ಳಿರಿಸಿತೊಂದರೆ ಕೊಟ್ಟು ಫೋಟೊ ತೆಗೆಯುತ್ತಿದ್ದೆ. ನಂತರ  ನನ್ನ ಕಾಟದಿಂದ ಬೇಸತ್ತು ನಾನು ಬಂದೆ ಎಂದರೆ ಓಡಿಹೋಗುತ್ತಿತ್ತು . ತಮ್ಮ ಅದರ ಮೇಲೆ ಒಂದು ಬುಟ್ಟಿ ಮಗುಚಿಹಾಕಿ ಒಡಲು ಬಿಡುತ್ತಿದ್ದ. ಹೀಗೆ ಒಮ್ಮೆಯಂತು ಮತ್ತೊಂದು ಬೆಕ್ಕು ಕಚ್ಚಲು ಬಂದಾಗ ಇದೇ ಬುಟ್ಟಿ ಅದನ್ನು ಉಳಿಸಿತ್ತು. ಕೆಲಸದ ಮೇಲೆ ಬರುತ್ತಿದ್ದವರು, ಪಿಹೆಚ್‌ಡಿ ವಿದ್ಯಾರ್ಥಿಗಳು ಹೀಗೆ ಎಲ್ಲರ ಕಾಲು ಸುತ್ತುತ್ತಾ ಆರಾಮಾಗಿ ಇತ್ತು.ಆದರೂ ಒಮ್ಮೆ ತೋಟದಲ್ಲಿ ಬೆನ್ನು ಮುರಿದು ನಡೆಯಲಾಗದ ಹಾಗೆ ಆದಾಗ ಅಮ್ಮ ಅದಕ್ಕೆ ದಿನದಿನವೂ ಸೇವೆ ಮಾಡಿದ್ದಳು.ಕಾಲು ಸರಿ ಇದ್ದಾಗ ಊರು ತಿರುಗುತ್ತಿದ್ದ ಬೆಕ್ಕು ಒಮ್ಮೇಲೆ ಡಲ್ ಆಗಿಬಿಟ್ಟಿತ್ತು. ೧.೬ ತಿಂಗಳ ನಂತರ ಆರ್ಕಿಡ್ ತೀರಿದ ಮೇಲೆ ಮತ್ತೊಂದು ಬೆಕ್ಕು ಇಲಿ ಹಿಡಿಯುವ ಕೆಲಸಕ್ಕೆ ಬೇಕು ಎಂಬ ಮತ್ತೊಂದು ನೆಪವೊಡ್ಡಿ ಮತ್ತೆ ತಂದಿದ್ದಾಯಿತು.
 
ಆಯಿ (ಅಜ್ಜಿ) ಬೆಕ್ಕು ತರುವಾಗ ಕೆಂಪು ಬಣ್ಣದ್ದು ತುಂಬ ಚೆನ್ನಾಗಿರುತ್ತದೆ ಎಂದು ಹೇಳಿದರು. ಹಾಗೆಯೆ ಪೂರ್ತಿ ಕೆಂಪು ಬಣ್ಣದ ಬೆಕ್ಕು ಮನೆಗೆ ಬಂತು.ಈ ಬೆಕ್ಕು ಬಂದಾಗಿನಿಂದ ಬೆಕ್ಕಿಗೂ ಅಮ್ಮಂಗೂ ಭಯಂಕರ ಕಾಳಗ. ಬೆಕ್ಕೋ ,ತಾನೇನು ಕಮ್ಮಿ ಎನ್ನುವಂತೆ ಅಮ್ಮ ಎದುರಿಗೆ ಕಂಡರೆ ಬುಸುಗುಟ್ಟು ಹಡಬೆ ಬೆಕ್ಕು ಎಂಬ ಬಿರುದು ಸಂಪಾದಿಸಿಕೊಂಡಿದೆ." ಅಲ್ಲ.. ಇಲಿ ಹಿಡಿಯಲು ತಂದ ಬೆಕ್ಕು ಹಾವು -ಹಲ್ಲಿ ಹಿಡಿಯಲು ಕುಳಿತರೆ ಎನು ಚಂದ" ಎನ್ನುವುದು ಅಮ್ಮನ ವಾದ.  ಬೆಕ್ಕಿನ ಪರ ವಹಿಸಿ ಮಾತಾಡುವುದು  ನನ್ನ ಕೆಲಸ. ಇದರ ಕಾರಣದಿಂದಲೇ ಹಲವು ಸಾರಿ ಬೈಸಿಕೊಂಡು "ಹಾಳು ಬೆಕ್ಕು" ಎಂದು ಬೈದುಕೊಂಡಿದ್ದೇನೆ. ಅಪ್ಪನ ಫ಼ಿಶ್ ಟ್ಯಾಂಕ್ನ ಮೀನುಗಳ ಮೇಲೆ ಸಾಮಾನ್ಯವಾಗಿ ಎಲ್ಲ ಬೆಕ್ಕುಗಳಿಗಿರುವಂತೆ ಆಸೆ ಈ ಬೆಕ್ಕಿಗೂ ಇತ್ತು. ಆದರೆ ಮೀನಿನ ಪುಣ್ಯ ಎನ್ನಬೇಕೊ ಅಥವಾ ಬೆಕ್ಕಿನ ದುರಾದೃಷ್ಟ ಎನ್ನಬೇಕೋ , ಇನ್ನೂ ಮೀನು ಆರಾಮಗಿ ಈಜುತ್ತಾ ಇದೆ. ಸರಿ ಮೀನಂತೂ ಹಿಡಿಯಲು ಆಗದು ,ಆದರೆ ಮೀನಿಗೆ ಹಾಕುವ ಆಹಾರವಿದೆಯಲ್ಲಾ ಅದನ್ನು ಉರುಳಿಸಿ ತಿನ್ನುವುದೆಂದರೆ ಬೆಕ್ಕಿಗೆ ಬಹಳ ಪ್ರೀತಿಯ ಕೆಲಸ. ಪಕ್ಕದಲ್ಲಿಯೇ ಇಲಿ ಹಾದುಹೋದರೂ ನೋಡದೆ ಬರಿ ಹಾಲು ಅನ್ನ ತಿನ್ನುವುದಷ್ಟೆ ಇದರ ಕೆಲಸ ಎನ್ನುವುದು ಅಮ್ಮನ ಉವಾಚ.ಈಗ ಹೇಳಿ ತಪ್ಪು ಬೆಕ್ಕಿನದೋ ಅಮ್ಮನದೊ? 




Comments

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ