Skip to main content

ಅಣ್ಣನ ನೆನಪು : ಮತ್ತೆ ಓದಿದಾಗ

ಈ ಪುಸ್ತಕವನ್ನು ನಾನು ಅದೆಷ್ಟು ಸರಿ ಓದಿದ್ದೆನೋ ಗೊತ್ತಿಲ್ಲ . ಒಂದು ನೂರು ಸಾರಿಯಾದರೂ ಆಗಿರಬಹುದೇನೊ! ಮೊದಲು ಓದಿದಾಗ ಹೇಗೆ ನಕ್ಕಿದ್ದೆನೋ ಹಾಗೆಯೆ ಈಗ ಓದಿದರೂ ನಗಿಸುತ್ತದೆ ಈ ಪುಸ್ತಕ. ಇದು ಒಂದು ರೀತಿಯಲ್ಲಿ ತೇಜಸ್ವಿಯವರ ಆತ್ಮಕಥೆಯೂ ಹೌದು, ಕುವೆಂಪು ಅವರ ವೈಯಕ್ತಿಕ ಜೀವನದ ಕತೆಯೂ ಹೌದು. 

ಇಡಿ ಪುಸ್ತಕದ ಪೂರ್ವಾರ್ಧ ಅಣ್ಣನ ನೆನಪಾಗಿ ಉಳಿದರೆ ಇನ್ನರ್ಧ ಭಾಗ ಶಾಮಣ್ಣ, ಬಿಎಸ್ ಆಚಾರ್ಯ.  ಮುಂತಾದವರ 'ಮಾರ್ವೆಲಸ್ ' ಪೇಚಿನ ಕಥೆಗಳು ಬರುತ್ತವೆ. ಒಂದು ಸರಳ ,ಸೈಕಲ್ ಲೈಸೆನ್ಸ್ ಇಲ್ಲದೆ ಓಡಾಡಿದ್ದರ ಕೇಸು ನ್ಯಾಯಾಲಯಕ್ಕೆ ಹೋಗಿ ಬಂದದ್ದರ ಕಥೆ, ಅಲ್ಲಿಯೇ ಬರುವ ಪೋಲಿಸ ಪೀಟರ್ ರಾಣಿ, ಶಾಮಣ್ಣನ ಸಂಗೀತದ ಹುಚ್ಚಿನ ಅವಾಂತರ, ದಂತವಾದ್ಯ, ಬುಲ್ ಬುಲ್ ತರಂಗ್, ಸ್ಕೂಲಿನಿಂದ ಪರಾರಿ, ನಾಯಿಯ ಬಾಲ ಮುರಿದದ್ದು...   ಇಂತಹ ಘಟನೆಗಳು ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕು ಅನ್ನಿಸುವಂತೆ ಮಾಡುತ್ತದೆ. ಬಿಎಸ್ ಆಚಾರ್ಯ ರ  ಕವಿಗಳ ಫೊಟೊ ಸಂಗ್ರಹ ಮಾಡುವ ಮಾರ್ವೆಲಸ್ ಐಡಿಯಾ ಕೊನೆಗೆ ಕ್ಯಾಮೆರಾ ಕಳ್ಳತನದೊಂದಿಗೆ‌ ಮುಗಿದದ್ದು, ಜವಹರಲಾಲ್ ನೆಹರುಗೂ ಸೈಕಲ್ ಗಲಾಟೆಗೂ ಇರುವ ಸಂಬಂಧ ತಿಳಿಯದೇ ಪೆಚ್ಚಾಗಿದ್ದು, ಸೆಂಟ್ ವಾಲಾನೊಬ್ಬ ಕುವೆಂಪುರವರಿಗೆ ಯಾವುದೋ ಸೆಂಟು ಹಚ್ಚಿ ದಿನವಿಡಿ 'ಕಸ್ತೂರಿ ಮೃಗದಂತೆ' ಗಮ ಬೀರುತ್ತಾ ಓಡಾಡಿದ್ದು, ಇಂಗ್ಲಿಶ್ ಪರೀಕ್ಷೆಯಲ್ಲಿ He   ಬರೆಯಲು  hi ಎಂದು ಬರೆದು ಫೇಲಾಗಿ ಬೈಸಿಕೊಂಡಿದ್ದು ಎಲ್ಲಾ ಘಟನೆಗಳು ನಮ್ಮೊಂದಿಗೇ ನಡೆಯುತ್ತಿ ದೆಯೆನೋ ಎನ್ನುವ ಹಾಗೆ ಭಾಸವಾಗುತ್ತದೆ.

ನನಗೆ ಅತಿ ಇಷ್ಟವಾದದ್ದು ಸಂಗೀತದ ಹುಚ್ಚಿನ ಕಥೆಗಳು. ಗ್ರಾಮಫೋನಿಂದ ಸಂಗೀತ ಕಲಿಯಲು ಹೋಗಿ ಮನೆಯ ಸಿಮೆಂಟ್ ಉದುರಲು ಶುರುವಾದದ್ದು, ಶಹನಾಯಿ ವಾದನವನ್ನು ಕಲಿಯುವಾಗ ನಾಯಿಗಳು ಕೈಜೋಡಿಸಿದ್ದು,ಶಾಮಣ್ಣನ ಹಲ್ಲಿನಿಂದ ಸಂಗೀತ ಹೊರಡಿಸುವ ಪ್ರಯತ್ನದ ಫಲ ದಂತವಾದ್ಯ, ಅದರಿಂದ ಶುರುವಾದ ಹಲ್ಲುನೋವು ಎಲ್ಲವೂ ಈ ಪುಸ್ತಕವನ್ನು ಇಷ್ಟದ ಅದರಲ್ಲೂ ಮಕ್ಕಳಿಗೆ ಇಷ್ಟವಾಗುವಂತೇ ಮಾಡುತ್ತದೆ. 
ಮೋದಲು ಲಂಕೇಶ್ ಪತ್ರಿಕೆಗಾಗಿ ಈ ಕಥೆಗಳ ಸರಣಿಯನ್ನು ಬರೆದಿದ್ದರು ಎನ್ನುವ ಮಾಹಿತಿಯೂ ಇದೆ 

ಅದೇನೆ ಇರಲಿ , ಅವರು  ಚಿಕ್ಕವರಿದ್ದಾಗ ನಾಯಿಮರಿಯ ಬಾಲ ಮುರಿದು ' ನಾಯಿ ಜಾತಿಯಿಂದ ಜಾತಿ  ನಾಯಿ'ಯನ್ನಾಗಿ ಮಾಡಿದ ಕಥೆ ನನ್ನನ್ನು  ನಾಯಿ ಸಾಕುವಂತೆ ಪ್ರೇರೇಪಿಸಿದ್ದಂತು ನಿಜ. 

ಒಟ್ಟಿನಲ್ಲಿ ಹೇಳುವುದಾದರೆ ಈ ಪುಸ್ತಕ ಒಂದು ಆತ್ಮಕಥೆಯಲ್ಲದ ಆತ್ಮಕಥೆ.

Comments

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ