Skip to main content

ಮಂಜಿನ ನಡುವೆ ಮೇಲೆದ್ದ ಬೆಂಕಿಯ ಕಿಡಿ : ಮಲಾಲ

೨೦೧೨ ಅಕ್ಟೋಬರ್ ೯ , ತಾಲಿಬಾನಿ ಉಗ್ರನೊಬ್ಬ ೧೪ ವರ್ಷ ವಯಸ್ಸಿನ ಮಲಾಲ ಯುಸಫ಼ೈಜಿಯಾ ಎಂಬ ಹುಡುಗಿಯ ತಲೆಗೆ ಹೊಡೆದ ಒಂದು ಗುಂಡು ಪ್ರಪಂಚದ ಸಾವಿರಾರು ಶಿಕ್ಷಣ ವಂಚಿತ ಮಕ್ಕಳು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿಯುವಂತೆ ಮಾಡಿತು. ಜಗತ್ತಿಗೆ ಅನಾಮಿಕಳಾಗಿದ್ದ ಇದೇ ಮಲಾಲಳಿಗಾಗಿ ಜಗತ್ತು ಪ್ರಾರ್ಥಿಸಿತ್ತು.
ಮಲಾಲ ಈಗ ಬರಿ ಹೆಸರಾಗಿ ಉಳಿದಿಲ್ಲ . ಆಕೆ ಒಬ್ಬ ಶಕ್ತಿಯಾಗಿದ್ದಾಳೆ. ತನ್ನ ಹುಟ್ಟಿದ ಊರಾದ ಸ್ವಾತ್ ಕಣಿವೆ ತಾಲಿಬಾನಿ ಆಕ್ರಮಿತ ಪ್ರದೇಶವಾಗಿದ್ದರೂ , ಜನರು ತಲೆಯೆತ್ತಿ ನೋಡಲೂ ಭಯಪಡುತ್ತಿದ್ದ ಸಮಯದಲ್ಲಿ ಅದೇ ತಾಲಿಬಾನಿಗಳ ವಿರುದ್ಧ ದನಿಯೆತ್ತಿ ಮಾತಾಡಿದ ಹುಡುಗಿ ಈಕೆ. ಕೇವಲ ೧೧ ವರ್ಷದವಳಾಗಿದ್ದಾಗ ಪಾಕಿಸ್ತಾನದ ಪೇಶಾವರದ ಪ್ರೆಸ್ ಕ್ಲಬ್ ನಲ್ಲಿ " ಮೂಲಭೂತ ಹಕ್ಕಾದ ಶಿಕ್ಷಣವನ್ನು ನಮ್ಮಿಂದ ಕಿತ್ತುಕೊಳ್ಳಲು ಆ ತಾಲಿಬಾನಿಗಳಿಗೆ ಎಷ್ಟು ಧೈರ್ಯ? " ಎಂದು ಪ್ರಶ್ನಿಸಿದ್ದಳು. 

  ಬಿಬಿಸಿ ಪತ್ರಿಕೆಗಾಗಿ ಸ್ವಾತ್ ಕಣಿವೆಯ ಪರಿಸ್ಥಿತಿ ಬಗ್ಗೆ ಗುಲ್ಮಕೈ ಎಂಬ ಗುಪ್ತ ನಾಮದಲ್ಲಿ ದಿನಚರಿ ಬರೆಯುತ್ತಿದ್ದ ಈಕೆ ಮತ್ತು ಅವಳ ತಂದೆ ಅದಾಗಲೆ ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅವಳ ತಂದೆ ಜೀಯುದ್ದೀನ್ ಯುಸಫ಼ೈಜಿಯ  ಶಿಕ್ಷಣ ತಜ್ಞ ರಾಗಿ, ಖುಶಾಲ್ ಎಂಬ ಶಾಲೆಗಳನ್ನು ನಡೆಸುತ್ತಿದ್ದವರು. ಮಲಾಲಾಳೆ ಹೇಳುವಂತೆ ಅವಳ ತಂದೆ ಅವಳಲ್ಲಿ ಬತ್ತದ ಸ್ಥೈರ್ಯವನ್ನು ತುಂಬಿದವರು.
ಬಿಬಿಸಿ ಯಲ್ಲಿ ಬರೆಯುತ್ತಿದ್ದ ದಿನಚರಿ ಪ್ರಸಿದ್ಧವಾದಂತೆ ಅವಳ ಜೀವನದ ಬಗ್ಗೆ ಬಿಬಿಸಿ, ನ್ಯುಯಾರ್ಕ್ ಟೈಮ್ಸ್ ಮುಂತಾದ ಮಾಧ್ಯಮಗಳು ಸಾಕ್ಶ್ಯಚಿತ್ರ ತಯಾರಿಸಿದರು. ಇದರಿಂದ ಆಕೆ ಸಾರ್ವಜನಿಕವಾಗಿ ಪ್ರಸಿದ್ಧಳಾದಳು. ಸಿಎನ್ ಎನ್ ನ ಸಂದರ್ಶನದಲ್ಲಿ "ನನಗೆ ಶಿಕ್ಷಣ ಪಡೆಯುವ ಹಕ್ಕಿದೆ, ಮಾತನಾಡುವ ಹಕ್ಕಿದೆ " ಎಂದು ಉತ್ತರಿಸಿದ್ದಳು.ಪರಿಣಾಮ, ಅವಳ ತಂದೆಗೂ ಸಹ ತಾಲಿಬಾನಿಗಳ ಜೀವ ಬೆದರಿಕೆ ಬಂದಿತ್ತು. ಇದೆಲ್ಲದರಿಂದ ಸಹಜವಾಗಿ ತಂದೆ ಜಿಯಾಯುದ್ದೀನ್ ತಮ್ಮ ಪರಿವಾರವನ್ನು ಪೇಶಾವರದ ತಮ್ಮ್ಮ ಗೆಳೆಯರ ಮನೆಗೆ ಕಳಿಸಿದರು. " ನನಗೆ ಇಲ್ಲಿ ಬೇಸರ ಬರುತ್ತಿದೆ. ಏಕೆಂದರೆ ಇಲ್ಲಿ ಓದಲು ಪುಸ್ತಕಗಳು ಇಲ್ಲ." ಎಂದು ಆಕೆ ತನ್ನ ದಿನಚರಿಯಲ್ಲಿ ಬರೆದಿದ್ದಾಳೆ.ವಾತಾವರಣ ತಿಳಿಯಾದ ನಂತರ ಮನೆಗೆ ಹೋದಾಗ" ನನಗೆ ನನ್ನ ಕಪಾಟನ್ನು ತೆಗೆಯಲು ನೋವಾಗುತ್ತದೆ. ನನ್ನ ಶಾಲಾ ಸಮವಸ್ತ್ರ, ಬ್ಯಾಗ್ ನೋಡಿದಾಗ ನಾನು ಮತ್ತೆ ಶಾಲೆಗೆ ಹೋಗಲಾರೆನೋ ಎಂದು ಅನಿಸಿ ಬೇಸರವಾಗುತ್ತದೆ." ಎಂದು ಬರೆದಿದ್ದಳು. 
       ಇವಳ ಮಾತುಗಳಿಂದ ತಾಲಿಬಾನಿಗಳು  ಶಾಲೆಯಿಂದ ವಾಪಸಾಗುವಾಗ ಬಸ್ಸಿನೊಳಗೆ ನುಗ್ಗಿ ಅವಳ ಹಣೆಗೆ ಗುಂಡಿಟ್ಟರು. ನಂತರ ಅವಳನ್ನು ಪೇಶಾವರದ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ದರೂ ಮೆದುಳಿನ ಎಡಭಾಗದಲ್ಲಿ ಊತ ಕಣಿಸಿಕೊಂಡಿದ್ದರಿಂದ ಲಂಡನ್ನಿ‌ನ ಬರ್ಮಿಂಗ್ಹ್ಯಾಮ್‌ ಕ್ವೀನ್ ಎಲಿಜಬೆತ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಮುಂದುವರೆಸಿದರು. ಅವಳ ತಂದೆ ಪತ್ರಿಕಾಗೋಷ್ಠಿಯಲ್ಲಿ " ಅವಳನ್ನು ಲಂಡನ್ ಗೆ ಸಾಗಿಸುವಾಗ ಅವಳ ಮೆದುಳು ಅಪಾಯಕಾರಿಯಾಗಿ ಊದಿಕೊಂಡಿತ್ತು. ಅವಳ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಬೇಕಾಗಿ ಬರಬಹುದು ಎಂದು ಭಾವಿಸಿದ್ದೆ." ಎಂದು ಹೇಳಿದ್ದಾರೆ. ನಂತರದಲ್ಲಿ ಮಲಾಲ ಚೇತರಿಸಿಕೊಂಡರೂ ಹಣೆಯ ಮೇಲೆ ಆಗಿದ್ದ ತೂತನ್ನು ಟೈಟಾನಿಯಮ್ ಪ್ಲೇಟ್ ನಿಂದ ಮುಚ್ಚಿದರು.  ತಾಲಿಬಾನ್ ಸಂಘಟನೆಯು ಈ ಘಟನೆಯ ಜವಬ್ದಾರಿ ಹೊತ್ತಿದ್ದು, ೧೦,೦೦೦ ಡಾಲರ್ ಹಣವನ್ನು ದಂಡವಾಗಿ ಪಾವತಿಸಿದೆ.

 ಇದಾದ ೨ ವರ್ಷಗಳ ನಂತರ ಇವಳು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಭಾರತದ ಕೈಲಾಶ್ ಸಥ್ಯಾರ್ಥಿ ಅವರೊಂದಿಗೆ ಪಡೆದಳು. ನೊಬೆಲ್‌ ಶಾಂತಿ ಪ್ರಶಸ್ತಿ ಪಡೆದ ಅತೀ ಕಿರಿಯ ವಯಸ್ಸಿನ ವ್ಯಕ್ತಿ ಇವಳು.

 ಈಗ ಏನು ಮಾಡುತ್ತಿದ್ದಾಳೆ ಮಲಾಲ?: ಚಿಕಿತ್ಸೆಯ ನಂತರ ಅಲ್ಲಿಯೆ ಉಳಿದ ಮಲಾಾಲ ಈ ವರ್ಷ  Oxford universityಇಂದ  ಪದವಿ ಪಡೆದಿದ್ದಾಳೆ.
Gulmakai, He named me Malala    ಮುಂತಾದ ಚಿತ್ರಗಳು, ಡಾಕ್ಯುಮೆಂಟರಿಗಳು ಸಾವಿರದ ಸಂಖ್ಯೆಯಲ್ಲಿ ಬಿಡುಗಡೆಯಾಗಿದೆ. Malala's magic pencil, I am Malala  ಇತ್ಯಾದಿ ಪುಸ್ತಕಗಳನ್ನು ಬರೆದಿದ್ದಾಳೆ. 
 
 ಮಲಾಲ, ಗ್ರೇಟಾ ಥಂಬರ್ಗ್, ಮಂಗೋಲಿಯಾದ ಜಾನಪದ ಕಥೆಯ ಪಾತ್ರ ಮುಲಾನ್, ಸೆವೆರ್ನ್ ಸುಜ಼ುಕಿ ಹೀಗೆ ಹಲವರು ಬದಲಾವಣೆಗೆ ಕಾರಣವಾಗಿದ್ದಾರೆ. 
ಇವರೆಲ್ಲರೂ ಭವಿಷ್ಯದ ಶಕ್ತಿಯಾಗಲಿ ಎಂದು ಹಾರೈಸೋಣವೆ!! ನಾವೂ ಬದಲಾವಣೆಯ ಭಾಗವಾಗೋಣವೆ? 
 
 ~ ವನ್ಯಾ ಸಾಯಿಮನೆ
   ೯ ನೇ ತರಗತಿ

Comments

Post a Comment

You may like these too...

ಭೂಮಿಯೂ ಒಂದು ಜೀವಿಯೆ?

 ಮೊನ್ನೆ ಬಿಕ್ಕೆ ಗುಡ್ಡಕ್ಕೆ ಹಣ್ಣು ಹೆಕ್ಕಲು ಹೊದಾಗ ಗೌರಿ ಹೂವಿನ ಬಳ್ಳಿಯನ್ನು ಕಂಡೆ. ಅದಾಗಲೆ ಕಂಬಳಿಹುಳವೊಂದು ಎಲೆಗಳನ್ನು ತಿನ್ನುತಿತ್ತು. ಮರುದಿನ ನೋಡಿದಾಗ ಹಕ್ಕಿಯೊಂದು ಅದೇ ಕಂಬಳಿಹುಳಗಳನ್ನು ತಿನ್ನುತಿತ್ತು. ಅಂದರೆ ನಿಸರ್ಗಕ್ಕೆ ಯಾವ ಜೀವಿಗಳೂ ಅತಿಯಾಗಿ ಸಂಖ್ಯೆ ಹೆಚ್ಚಿಸಲು ಕೊಡದೆ ಸಮತೋಲನ ಕಾಪಾಡಲು ಗೊತ್ತಿದೆ ಎಂದಾಯಿತು. ಆದರೆ  ಆಗ ತಾನೆ ಗೌರಿಹೂವು ಚಿಗುರಿದ್ದು ಚಿಟ್ಟೆಗೆ ಹೇಗೆ ಗೊತ್ತಾಯಿತು? ಅಲ್ಲಿಯೆ ಕಂಬಳಿಹುಳ ಹೆಚ್ಚು ಎಲೆಗಳನ್ನು ತಿನ್ನುತ್ತಿದೆ ಎಂಬುದು ಹಕ್ಕಿಗೆ ಹೇಗೆ ಗೊತ್ತಾಯಿತು?  ಮಳೆಗಾಲದಲ್ಲಿ    ಮಣ್ಣು ತೊಳೆದುಹೋದ ನಂತರ ಕೆಲವೇ ದಿನಗಳಲ್ಲಿ ಹೊಸ ಹುಲ್ಲು ಹುಟ್ಟುತ್ತದೆ. ಹಾಗೆಯೇ ಹೊಸ ಮಣ್ಣು ಹಾಕಿದಾಗಲೂ ಸಹ ಬಚ್ಚಲುಬಳ್ಳಿಯಂತಹ ಬಳ್ಳಿಗಳು ನಾವು ಊಹಿಸಲೂ ಸಾಧ್ಯವಿಲ್ಲದ ವೇಗದಲ್ಲಿ  ಬೆಳೆಯುತ್ತವೆ. ಹಕ್ಕಿಗಳು ತಿಂದು ಬಿಸುಟಿದ ಬೀಜಗಳು ಮೊಳಕೆಯೊಡೆದು ಹೊರಬರುತ್ತವೆ.       ಹಾಗಾದರೆ ಭೂಮಿಗೆ ಯಾರು ಹೇಳಿಕೊಟ್ಟಿದ್ದು  ಮಣ್ಣು ತೊಳೆದು ಹೋಗಲಾಗದಂತೆ ಗಿಡ ಹುಟ್ಟಬೇಕೆಂದು? ಯಾರು ಹೇಳಿಕೊಟ್ಟಿದ್ದು ಹಕ್ಕಿಗಳು ಬೀಜ ಪ್ರಸಾರ ಮಾಡಬೇಕೆನ್ನುವುದ್ನನು? ಗದ್ದೆ ಕಟಾವಿನ ಕೆಲವೇ ದಿನಗಳ ನಂತರ ಕೀಟಹಾರಿ ಡ್ರಾಸಿರ ಗಿಡ ಹೇಗೆ ಬರುತ್ತವೆ? ಅಲ್ಲಿ ಹುಟ್ಟಿದರೆ ಮಾತ್ರ ಆಹಾರ ಸಿಗುತ್ತದೆ ಎಂದು ಡ್ರಾಸಿರಾಕ್ಕೆ ಹೇಗೆ ಗೊತ್ತು ?  ಹಾಗಾದರೆ ಭೂಮಿಗೂ ಪ್ರಜ್ನೆ ಇದೆಯೆ? ಭೂಮಿಯೂ ಒಂದು ಜೀವಿಯೆ?       ಈಗ ಜಾಗತಿಕ ವಿಷಯಗಳನ್ನು

ಜರ್ಮನಿಯ ಅಸ್ಪಷ್ಟ ನೆನೆಪುಗಳು!

 ಮೊನ್ನೆ ಹೀಗೆ ಯಾವುದರ  ಬಗ್ಗೆಯೋ ಮಾತಾಡುತ್ತಿದ್ದಾಗ ಮಧ್ಯೆ ಅದೇಕೋ ಜರ್ಮನಿಯ ವಿಷಯ ಹಾದು ಹೋಯಿತು. ಸುಮಾರು ಮೂರೋ ನಾಲ್ಕೊ  ವರ್ಷದವಳಿರುವಾಗ ಅಪ್ಪ Griefwald ನಲ್ಲಿ ಇದ್ದಾಗ   ಮೂರು ತಿಂಗಳು ನಾವೂ ಅಲ್ಲಿಗೆ ಹೋಗಿದ್ದೆವು. ನಾನಾಗ ತುಂಬಾ ಚಿಕ್ಕವಳಿದ್ದುದ್ದರಿಂದ ಅಷ್ಟೇನೂ ಸರಿಯಾಗಿ ನೆನಪಿಲ್ಲ, ಆದರೂ ನನ್ನ ಅಸ್ಪಷ್ಟ ನೆನಪುಗಳನ್ನು ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ. ಅದು ಸುಮಾರು ಮೇ ತಿಂಗಳ ಕೊನೆಯ ವಾರವೇನೋ, ನಾವು ಹೊರಟಿದ್ದು. ಬೆಂಗಳೂರಿನಿಂದ ಸುಡು ಬಿಸಿಲಿನ ಓಮಾನ್ ದೇಶಕ್ಕೆ, ನಂತರ Frankfurt ಗೆ ಹೋಗುವುದಾಗಿತ್ತು. ಅದರ ವೀಸಾಕ್ಕಾಗಿ ಚೆನ್ನೈ ವರೆಗೆ ಅಲೆದು ಅಂತೂ ಎರಡನೇ ಪ್ರಯತ್ನದಲ್ಲಿ ವೀಸ ಸಿಕ್ಕಿತ್ತಂತೆ.ನನಗೆ ಅದರ ಬಗ್ಗೆ ಹೆಚ್ಚೇನು ತಿಳಿದಿಲ್ಲ.       ಓಮಾನ್ ವಿಮಾನ ನಿಲ್ದಾಣದಲ್ಲಿ ಚೀನಾಕ್ಕೆ ಟೇಕ್ ಆಫ್ ಆಗಲಿದ್ದ ಕೆಂಪು  ವಿಮಾನದಲ್ಲೇ  ಹೋಗಬೇಕು ಎಂಬ ಡಿಮಾಂಡ್ ಮಾಡಿದ್ದೆ(ನನಗೆ ಕೆಂಪು ಎಂದರೆ ಭಾರಿ ಪ್ರೀತಿಯಾಗಿತ್ತು ಆಗ). ನಮ್ಮ ದುರಾದೃಷ್ಟ, ನಾವು ಪ್ರಯಾಣಿಸುವ ವಿಮಾನ ಹಸಿರು ತಿಳಿ ಹಸಿರು ಬಣ್ಣದ್ದಾಗಿತ್ತು. ಅದು ಹೇಗೊ ನಂಬಿಸಿ ಒಳಗೆ ಕರೆದುಕೊಂಡು ಹೋಗಿದ್ದರೂ ಮತ್ತೆ ಇಳಿದಾಗ ಅದರ ಬಣ್ಣ ಕಂಡುಹೊಯಿತು. ಇನ್ನೇನು ಮಾಡುವುದು? ಅಮ್ಮ "ವಿಮಾನಕ್ಕೆ ಆ ಬಣ್ಣ ಇಷ್ಟ ಆಜಿಲ್ಲ್ಯೆ,ಅದ್ಕೆ ಆಕಾಶದಲ್ಲೆ ಹಾರ್ತಾ ಇರಕಾರೆ ಬೇರೆ ಬಣ್ಣ ಪೇಂಟ್ ಮಾಡಿಗಿದ" ಎಂದು ನಂಬಿಸಿದ್ದಳು! ಅಂತೂ ಸಮಸ್ಯ

ಮರಗಳ ಮಾತನು ಕೇಳಿದಿರಾ?

  ನಾವೆಲ್ಲರೂ ಒಮ್ಮೆಯಾದರೂ ಈ ಕಥೆಯನ್ನು ಕೇಳಿರುತ್ತೇವೆ. ಒಬ್ಬ ಹುಡುಗ ದಿನವೂ ಒಂದು ಮಾವಿನ ಮರದ ಬಳಿ ಆಡಲು ಬರುತ್ತಿರುತ್ತಾನೆ. ಮರಕ್ಕೂ ಅವನನ್ನು ಕಂಡರೆ ತುಂಬಾ ಪ್ರೀತಿ. ಆ ಮರ ಅವನಿಗೆ ಹಣ್ಣುಗಳನ್ನು ಕೊಡುತ್ತಾ ಇರುತ್ತದೆ. ಸಮಯ ಕಳೆದಂತೆ ಹುಡುಗ ದೊಡ್ಡವನಾಗುತ್ತಾನೆ. ಮರದ ಬಳಿ ಬರುವುದನ್ನೇ ಕಡಿಮೆ ಮಾಡುತ್ತಾನೆ. ಒಮ್ಮೆ ಅವನು ಮರ ಇರುವ ದಾರಿಯಲ್ಲಿ ಹೋಗುತ್ತಿರುತ್ತಾನೆ. ಮರ ಅವನನ್ನು ಕರೆಯುತ್ತದೆ. ''ಹುಡುಗಾ, ನಿನಗೆ ಹಣ್ಣು ಬೇಕೆ? ಬಾ ನನ್ನ ಮೇಲೆ ಹತ್ತಿ ಕುಳಿತಿಕೋ.'' ಎಂದು ಕರೆಯುತ್ತದೆ. ಹುಡುಗ ನಿರ್ದಾಕ್ಷಿಣವಾಗಿ '' ನಾನೀಗ ದೊಡ್ಡವನು.ನನಗೆ ಆಡಲು ಸಮಯವಿಲ್ಲ. ನನ್ನ ಗೆಳೆಯರಿಗೆ ಹಣ್ಣು ಬೇಕು. ನೀನು ಕೊಡುತ್ತಿಯಾ?'' ಎಂದು ಉತ್ತರಿಸುತ್ತಾನೆ. ''ಸರಿ. ನೀನೆ ಹಣ್ಣುಗಳನ್ನು ತೆಗೆದುಕೊ'' ಎಂದು ಹೇಳಿ  ಮರವೂ ಸುಮ್ಮನಾಗುತ್ತದೆ. ಕೆಲವು ವರ್ಷಗಳ ನಂತರ ಹುಡುಗ ಮತ್ತೆ ಬರುತ್ತಾನೆ. ಅವನೇಗ ಕೆಲಸ ಮಾಡುತ್ತಿರುವವವನು. ಮರ ಮೊದಲಿನಂತೆ  ಪ್ರೀತಿಯಿಂದ '' ಹುಡುಗಾ, ಬಾ  ನನ್ನ ಕೊಂಬೆಗಳ ಮೇಲೆ ಕುಳಿತು ಆಟವಾಡು. ನನ್ನ ಹಣ್ಣುಗಳನ್ನು ತಿನ್ನು ಎಂದು ಕರೆಯುತ್ತದೆ . ಆಗ ಅವನು ‘’ನನಗೆ ಸಮಯವಿಲ್ಲ. ನನಗೆ ನಿನ್ನ ಕಾಂಡ  ಬೇಕು. ಅದನ್ನು ಮಾರಿ ನಾನು ಹಣ ಗಳಿಸುತ್ತೇನೆ’’ ಎಂದು ಹೇಳುತ್ತಾನೆ.ಮರಕ್ಕೆ ನೋವಾದರೂ ಒಪ್ಪಿಕೊಂಡು ತನ್ನ ಕೊಂಬೆಗಳನ್ನು ಅವನಿಗೆ ನೀಡುತ್ತದೆ. ಹತ್ತ